Slide
Slide
Slide
previous arrow
next arrow

ಅ.3ರಿಂದ ಕೊಂಡ್ಲಿಯಲ್ಲಿ ನವರಾತ್ರಿ ಉತ್ಸವ: ಸಾಂಸ್ಕೃತಿಕ ಕಾರ್ಯಕ್ರಮ

300x250 AD

ಸಿದ್ದಾಪುರ: ತಾಲೂಕಿನ ಕೊಂಡ್ಲಿಯ ಶ್ರೀ ಕಾಳಿಕಾಭವಾನೀ ದೇವಾಲಯದಲ್ಲಿ ಅ.3 ರಿಂದ ಅ.12 ರ ವರೆಗೆ ನವರಾತ್ರಿ ಉತ್ಸವ ಜರುಗಲಿದೆ. ಶ್ರೀದೇವಿಯ ಸನ್ನಿಧಿಯಲ್ಲಿ ಪಂಚಾಮೃತಪೂರ್ವಕ ಕಲ್ಪೋಕ್ತ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ ಪೂಜೆ, ಸಪ್ತಶತಿ ಪಾರಾಯಣ ಪ್ರತಿದಿನವೂ ನಡೆಯಲಿದೆ. ಅ.4 ರಂದು ನವಚಂಡೀ ಹವನ, ಪ್ರಸಾದ ಭೋಜನ, 5 ರಂದು ಸಂಜೆ 7 ರಿಂದ ಶ್ರೀ ಬೊಮ್ಮೇಶ್ವರ ಯಕ್ಷಕಲಾ ಕೇಂದ್ರ ಹೊಸೂರು ಹಾಗೂ ಯಕ್ಷತರಂಗಿಣಿ ಹಾರ್ಸಿಕಟ್ಟಾ ಇವರುಗಳ ಸಹಯೋಗದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ, 6 ರಂದು ಸಂಜೆ 7 ರಿಂದ ಕು.ವಿಭಾ ರಮೇಶ ಹೆಗಡೆ ಪೂಣಾ ಹಾಗೂ ಶ್ರೀಮತಿ ವಾಣಿ ರಮೇಶ ಹೆಗಡೆ ಸಂಗಡಿಗರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಯಾವತ್ತೂ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಆಡಳಿತ ಮಂಡಳಿಯವರು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top